‘ಮಧುರ ಸ್ವಪ್ನ’ ನಾಳೆಯಿಂದ ತೆರೆಗೆ
Posted date: 18 Thu, Feb 2016 – 02:13:50 PM

ಒಂದು ಮಧುರವಾದ ಶೀರ್ಷಿಕೆ ‘ಮಧುರ ಸ್ವಪ್ನ’. ಮನೆ ಮಂದಿಯೆಲ್ಲಾ ನೋಡಬಹುದಾದಚಿತ್ರಎಂದು ಸೆನ್ಸಾರ್ ಮಂಡಳಿಯಿಂದ ‘ಯು’ ಅರ್ಹತಾ ಪತ್ರ ಪಡೆದಿದ್ದ ಸಿನಿಮಾ ನಾಳೆಯಿಂದ ಬಿಡುಗಡೆಆಗುತ್ತಿದೆ.
ಹೆಮ್ಮಿಗೆ ಪುರದ ಸಂಜೀವ್‌ಕುಮಾರ್‌ಅವರ ಪ್ರಥಮಕಾಣಿಕೆ ‘ಮಧುರ ಸ್ವಪ್ನ’ಚಿತ್ರಕ್ಕೆಎ ಗ್ಲೋರಿಆಫ್‌ಡ್ರೀಮ್ ಲವ್ ಎನ್ನುವ ಅಡಿ ಬರಹವಿದೆ. ರವಿ ರತ್ನಅವರ ನಿರ್ದೇಶನವಿರುವ ಈ ಚಿತ್ರದಲ್ಲಿಹೆಸರಾಂತ ತುಳು ರಂಗಭೂಮಿ ನಾಟಕಕಾರದೇವದಾಸ್‌ಕಾಪಿಕಡ್‌ಅವರ ಪುತ್ರಅರ್ಜುನ್‌ನಾಯಕನಾಗಿ ನಟಿಸಿದ್ದಾರೆ. ಇವರಜೊತೆಗೆಕೀರ್ತನ ಪೊಡ್ವಲ್‌ಮತ್ತುಮಹಾಲಕ್ಷ್ಮಿನಾಯಕಿಯರು. ಪೋಷಕ ಕಲಾವಿದರುಗಳಾಗಿ ಅವಿನಾಶ್, ವಿನಯಪ್ರಕಾಶ್, ಅಶೋಕ್, ಮುಖ್ಯಮಂತ್ರಿಚಂದ್ರು, ರಾಮಕೃಷ್ಣ, ಯಶವಂತಪುರ ಶಾಸಕ ಸೋಮಶೇಖರ್ ಹಾಗೂ ಇತರರುಇದ್ದಾರೆ.
ಸೆಲ್ವಮ್‌ಛಾಯಾಗ್ರಹಣ, ರವಿ ಕಲ್ಯಾಣ್‌ಅವರು ಏಳು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಈಶ್ವರ್‌ಅವರ ಸಂಕಲನ, ಹರಿಕೃಷ್ಣಅವರ ನೃತ್ಯ ನಿರ್ದೇಶನ, ವಿನೋದ್‌ಅವರ ಸಾಹಸ ಈ ಚಿತ್ರಕ್ಕಿದೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed